Saturday, December 21, 2019

ಬದಲಾಗಿದ್ದು!!

ಮನೆ ತುಂಬಾ ಜನರಿದ್ದು
ಕೈಯಲ್ಲಿ ಕಾಸಿಲ್ಲದೆ
ಊಟಬಟ್ಟೆಗೆ ಪರದಾಡಿದರೂ
ಅಭದ್ರತೆಯೆಂಬುದೇ ಅರಿಯದ
ಆ ಕಾಲ!

ಕೈ ತುಂಬಿ ಸೋರುವಷ್ಟು ದುಡ್ಡು
ಖರ್ಚು ಮಾಡಲು, ದಾರಿಗಳ ಹುಡುಕುವ,
ಜನರಿಲ್ಲದ ಮನೆಯಲ್ಲಿ..
ಜನರಿದ್ದೂ ಇಲ್ಲದ ಮನೆಯಲ್ಲಿ...
ಸೋಷಿಯಲ್ ಮೀಡಿಯಾದಿ
ಪ಼ೋಟೊ, ಸ್ಟೇಟಸ್ ಹಾಕಿ 
ಸುರಕ್ಷತೆಯ ಹುಡುಕುವ
ಈ ಕಾಲ!

ಕಾಲವೇನು ಮಾಡಿತ್ತು...
ಬದಲಾದದ್ದು ನಾವು! 


ಕಪ್ಪು ಬಿಳುಪು ಚಿತ್ರ ಪಟ

ಗೂಡು ಸ್ವಚ್ಚ ಮಾಡೊ
ಕಾರ್ಯದಿ ಸಿಕ್ಕ ಆ 
ಕಪ್ಪು ಬಿಳುಪು ಚಿತ್ರ ಪಟಗಳು...
ಸಾವಿರ ವಿಷಯ 
ಸಾರುತಿದ್ದವು...

ಸಾದಾ ಸೀರೆಯಲ್ಲೂ 
ಅಮ್ಮನ ಸುಂದರ ಮುಖ
ವರ್ಷಗಳುರುಳಿದರೂ 
ಬದಲಾಗದ ಅಪ್ಪನ ಆ ಪೋಸು

ರಜೆಯಲಿ ಅಜ್ಜಿಮನೆಗೆ
ಮೊಮ್ಮಕ್ಕಳ ದಾಳಿ
ಇಳಿವಯಸ್ಸಿನ ಅಜ್ಜಿತಾತರಿಗೆ
ನಾವು ಮಾಡಿದ ಹಾವಳಿ

ಅಜ್ಜಿ ಮನೆಯ ಆ ಗಡಿಯಾರ,
ಬೀಸೋಕಲ್ಲು, ಉರಿವಲೆ
ಸಾರುತಿರುವವು ಸಾವಿರ ಕಥೆಗಳ...
ಸಂಬಂಧಗಳ ಸವಿನೆನಪುಗಳ...

ಮೊಮ್ಮಕ್ಕಳೆಲ್ಲ ಒಟ್ಟಿಗೆ ಕೂತು
ಹಾಕಿಸಿಕೊಂಡ ತುತ್ತು
ಊಟಬೇಡವೆಂದವರು
ಇದ್ದ ಅನ್ನವನ್ನೆಲ್ಲಾ ಖಾಲಿ ಮಾಡಿದ ಹೊತ್ತು!

ಆ ಮೆಂತ್ಯದ ಹಿಟ್ಟು, ತಂಗಳ ಮೊಸರನ್ನ
ಅಜ್ಜಿಯ ಕೈ ಸಾರು
ತಾತನ ಕೈ ಬೋಂಡ
ಎಲ್ಲರೂ ಒಟ್ಟು ಸೇರಲು
ಅಜ್ಜಿ ತಾತ ನೆಪಮಾತ್ರವಾಗಿರಲು

ಬಣ್ಣಗಳಿಲ್ಲದ ಬದುಕಲ್ಲಿ
ಸಂತೋಷ ನೆಮ್ಮದಿಗಳೆಷ್ಟಿತ್ತು! 

ಈಗ ತರಾವರಿ ಬಣ್ಣಗಳು...
ಸಂಬಂಧಗಳ ಬೆಸೆಯಲು
ಪುರುಸೊತ್ತಿಲ್ಲದಷ್ಟು ದೊಡ್ಡ 
ಬಣ್ಣದ ಲೋಕ!!

ಉದ್ಯೋಗದ ಸುತ್ತ ಬಣ್ಣ ಬಳಿದು
ಸಂಬಂಧಗಳ ಕಪ್ಪು‌ಬಿಳುಪು ಪ಼ೋಟೊ
ಎಫ಼್ ಬಿ, ವಾಟ್ಸಾಪ್, ಇನ್ಸ್ಟಾಗ್ರಾಮ್ 
ಚೌಕಟ್ಟಿನಲ್ಲಿ ಭದ್ರ!! 


Friday, December 6, 2019

ನಮ್ಮದಲ್ಲದ ನಮ್ಮೂರು!

ನಮ್ಮ ಊರು.. ಬೆಂಗಳೂರು..
ನಿಮ್ಮೂರಲ್ಲಿ ಸಿಗದದ್ದು ಸಿಗುವಂತ ದೊಡ್ಡೂರು!

ಮನೆಯಿಂದ ಹೊರಬಂದರೆ
ಟ್ರಾಫ಼ಿಕ್ ಸ್ವಾಗತ
ವಾಹನ ಸದ್ದುಗಳ ಮಧ್ಯೆ
ಹೇಳಿದ್ದೆಲ್ಲವೂ ಸ್ವಗತ!

ಶ್ರೀಮಂತರಿಗೆಂಬಂತೆ
ಮಾಡಿಟ್ಟ ಊರು
ಪಾದಾಚಾರಿಗಳಿಗೆ ನಡೆಯಲು 
ಜಾಗವೇ ಇಲ್ಲ ಒಂಚೂರು!

ರಸ್ತೆ ಮಧ್ಯ ಗುಂಡಿಗಳೋ
ಗುಂಡಿಗಳ ಮಧ್ಯೆ ರಸ್ತೆಯೋ
ದ್ವಿಚಕ್ರ ವಾಹನ ಸವಾರರರಿಗೆ
ಉಚಿತ ನಾಟ್ಯ ತರಗತಿಯೋ!

ಮನೆಯಿಂದ ಹೊರಗಡೆಯೇ  ಕಳೆವೆವು ಹೊತ್ತು!
ದುಪ್ಪಟ್ಟು ಬೆಲೆಯ ಬಾಡಿಗೆ ತೆತ್ತು
ಸಮಯವು ಇರದಿರೆ ಬೇಯಿಸಲು ತುತ್ತು
ದುಬಾರಿ ವಿದೇಶಿ ಮೇಕಪ್ ಹೊತ್ತು!

ಮಾಲುಮಂದಿರವೆಂಬ ಭೇದವಿಲ್ಲದೆ
ಗಾಡಿ, ಹೋಟೆಲ್ಲೆಂಬ ತಾರತಮ್ಯವಿಲ್ಲದೆ
ಎಲ್ಲಿ ನೋಡಿದರಲ್ಲಿ ಜನಸಾಗರ
ಕೋಟ್ಯಾಂತರ ಜನರಿಗೆ ಆಶ್ರಯವಾದ ನಗರ!

ಹಲವರಿಗೆ ಅನ್ನವಿತ್ತ ನಗರ
ಕೆಲವರಿಗೆ ಉದ್ಯೋಗವಿತ್ತ ನಗರ
ಮಿಕ್ಕವರಿಗೆ ವಿದ್ಯಾದಾತ ನಗರ
ಮಗದವರಿಗೆ ಜೊತೆಗಾರರನಿತ್ತ ನಗರ!

ಬನ್ನಿ, ಉಳಿಸೋಣ ಉದ್ಯಾನಗಳ
ಬೆಳೆಸೋಣ ಗಿಡಮರಗಳ
ಮನೆ ತ್ಯಾಜ್ಯಗಳ ಬೇರ್ಪಡಿಸಿ ನೀಡೋಣ
ಕಸವನ್ನ ಎಲ್ಲೆಂದರಲ್ಲಿ ಎಸಯದೆ ಇರೋಣ

ಪ್ಲಾಸ್ಟಿಕ್ ಬಳಕೆ ಕಡಿಮೆ‌ ಮಾಡೋಣ
ಜ಼ೀರೊ ವೇಸ್ಟ್ ಗುರಿ ಮುಟ್ಟೋಣ
ಪಬ್ಲಿಕ್ ಟ್ರಾನ್ಸಪೋರ್ಟ್ ಹೆಚ್ಚೆಚ್ವು ಬಳಸೋಣ
ಈ‌ ಮಣ್ಣಿನ ಋಣ ಕಿಂಚಿತ್ತಾದರೂ ತೀರಿಸೋಣ!












Tuesday, December 3, 2019

ವ್ಯತ್ತಾಸ

ಜಾಸ್ತಿ ಉಪ್ಪು ತಿಂದರೆ
ಬಿಪಿ ಏರಿ ಸಿಟ್ಟು 
ಹೆಚ್ಚತ್ತಂತೆ ಜನರಿಗೆ
ಅಡಿಗೆಗೆ ಉಪ್ಪು ಕಮ್ಮಿಯಾದರೆ
ಸಿಟ್ಟು ನೆತ್ತಿಗೇರತ್ತೆ 
ನಮ್ಮನೆಯವರಿಗೆ!

Saturday, November 30, 2019

ಗ್ರಹಿಕೆ

ಅದೇ ಮಾತುಗಳಿಗೆ
ಅವಳು ಒಲಿದಳು
ಇವಳು ಮುನಿದಳು

ವಿಧಿಯ ಬಗೆ

ಅಂದು ಬಯಸಿದ್ದು
ಕನಸ ಕಂಡಿದ್ದು
ಸಿಗಲಿಲ್ಲ
ಫಲಿಸಲಿಲ್ಲ...

ಹಿಂತಿರುಗಿ
ನೋಡೆ ಇಂದು
ಆಸೆಯ ಸಂಕೋಲೆಗಳೇ 
ಕಾಣುತ್ತಿವೆ!

ಆದದ್ದೆಲ್ಲಾ ಒಳಿತೇ ಆಯಿತು

ಒಂದು ಪ್ರೇಮ ಕವಿತೆ

ನಾ ನಿನ್ನ  ಅರಸದೆ, ಬಯಸದೆ  ನೀ ನನ್ನ  ಅರಸದೆ, ಬಯಸದೆ  ವಿಧಿಯು ನಮ್ಮ  ಕೂಡಿಸಿರೆ ನಮ್ಮೀ ನಿತ್ಯ ಮಿಲನ  ಸುದೀರ್ಘ ಪಯಣ   ಹಾಕಿದೆ ಬುನಾದಿ  ನನ್ನ ಬದುಕಿಗೆ  ನನ್ನ ಮನದಲಿ...