Saturday, June 13, 2015

'ವರ'


ದೇ'ವರ'
ನಂಬಲು
'ವರ'
ಕೊಡಬೇಕಲ್ಲವೇ
ಅವನು!!

Saturday, May 23, 2015

ಪದಬಂಧದ ಪ್ರಬಂಧ

ನಾವು ಸಣ್ಣವರಿದಾಗ ಕಲಿತ ಅಭ್ಯಾಸಗಳು ಅಷ್ಟು ಸುಲಭವಾಗಿ ಬಿಡುವುದಕ್ಕೆ ಆಗದು. ಅಷ್ಟಿಲ್ಲದೆ ತಿಳಿದವರು 'ಹುಟ್ಟು ಗುಣ ಸುಟ್ಟರೂ ಹೋಗಲ್ಲ' ಎಂದು ಹೇಳುತ್ತಿರಲಿಲ್ಲ. ಹಾಗಾಗಿ ಮಕ್ಕಳಿಗೆ ಒಳ್ಳೆಯ ಅಭ್ಯಾಸ ಕಲಿಸುವುದು ತುಂಬಾ ಮುಖ್ಯ. ಹಾಗಂತ ಹೇಳುವಾಗ ಇನ್ನೊಂದು ಗಾದೆ ನೆನಪಿಗೆ ಬರುತ್ತಿದೆ. 'ಗಿಡವಾಗಿ ಬಗ್ಗದ್ದು, ಮರವಾಗಿ ಬಗ್ಗೀತೆ?'. ಕೆಲವೊಂದು ಅಭ್ಯಾಸ, ವಿದ್ಯೆಗಳು, ದೊಡ್ಡವರಾದ ಮೇಲೆ ಕಲಿಯುವುದು ಕಷ್ಟ.

ನನ್ನ ಅನುಭವದಲ್ಲಿ ಹೇಳುವುದಾದರೆ, ನಾನು ಸಣ್ಣವಳಿದ್ದಾಗಿನಿಂದ ತುಂಬಾ ಆಟಗಳಲ್ಲಿ ಭಾಗವಹಿಸುತ್ತಿದ್ದೆ. ಆದರೆ ಈಜುವುದ ಮಾತ್ರ ಕಲಿಯಲಿಲ್ಲ. ಈಗ ಸುಮಾರು ಐದು ವರ್ಷಗಳಿಂದ ಎಷ್ಟು ಪ್ರಯತ್ನ ಪಟ್ಟರೂ ಸರಿಯಾಗಿ ಈಜು ಕಲಿಯುವುದಕ್ಕೆ ಆಗಿಲ್ಲ. ಯಾಕೆ ಈ ಅಭ್ಯಾಸಗಳ ಬಗ್ಗೆ ಹೇಳುವುದಕ್ಕೆ ಹೊರಟೆ ಎಂದರೆ, ನಾನು ಚಿಕ್ಕವಳಿದ್ದಾಗ ನನ್ನ ಅಮ್ಮ ಪದಬಂಧ ಮಾಡುವ ಅಭ್ಯಾಸ ಮಾಡಿಸಿದ್ದರು. ದಿನಾ, ಬೆಳಗ್ಗೆ ಪದಬಂಧ ಮಾಡಿಲ್ಲ ಅಂದ್ರೆ ನನಗೆ ಒಂದು ರೀತಿಯ ಹಿಂಸೆ ಆಗುತ್ತಿರುತ್ತೆ. ನಮ್ಮ ಆಡು ಭಾಷೆಯಲ್ಲಿ ಹೇಳುವುದಾದರೆ ಕೈ ಗುರುಗುಡುತ್ತೆ!

ಪದಬಂಧ ಮಾಡುವುದು ಒಂದು ಒಳ್ಳೆ  ಹವ್ಯಾಸ. ಯಾಕಪ್ಪ ಅಂದರೆ ಪದಬಂಧ ಮಾಡುವುದಕ್ಕೆ ಸಮಸ್ಯೆ ಬಿಡಿಸುವ  ಕೌಶಲ್ಯವಿರಬೇಕು. ಸಮಸ್ಯೆ ಬಿಡಿಸುವುದನ್ನು ವರ್ಲ್ಡ್ ಹೆಲ್ತ್ ಆರ್ಗನೈಜೇಶನ್ ಒಂದು ಜೀವನ ಕೌಶಲ್ಯವೆಂದು ಗುರುತಿಸಿದೆ. ವರ್ಲ್ಡ್ ಹೆಲ್ತ್ ಆರ್ಗನೈಜೇಶನ್ ಅವರು ಇನ್ನು ಹತ್ತು ಜೀವನ ಕೌಶಲ್ಯಗಳನ್ನು ಗುರುತಿಸಿದ್ದಾರೆ. ಪ್ರತಿಯೊಬ್ಬ ಮನುಷ್ಯನು ಮಾನಸಿಕವಾಗಿ ಆರೋಗ್ಯವಾಗಿ, ನೆಮ್ಮದಿಯಾಗಿ ಇರಲು ಈ ಕೌಶಲ್ಯಗಳು ನೆರವಾಗುತ್ತವೆ.

ನೀವು ಪದಬಂಧ ಮಾಡಿದ್ದರೆ ನಿಮಗೆ ಈ ಅನುಭವಗಳು ಆಗಿರಬಹುದು. ಪದಬಂಧ ಮಾಡಲು ಕೆಲವು ಸೂಚನೆಗಳಿರುತ್ತವೆ.
'ಎಡದಿಂದ ಬಲಕ್ಕೆ' ಹಾಗು 'ಮೇಲಿನಿಂದ ಕೆಳಕ್ಕೆ' ಎಷ್ಟು ಅಕ್ಷರ ಹಾಗು ಯಾವ ಪದ ಎನ್ನುವುದಕ್ಕೆ ಸುಳಿವು ಕೊಟ್ಟಿರುತ್ತಾರೆ.  ಪದಗಳು ಇಂತದ್ದೆ ಅನುಕ್ರಮದಲ್ಲಿ ಬಿಡಿಸಬೇಕು ಎನ್ನುವ ನಿಯಮವೇನೂ ಇಲ್ಲ. ಯಾವ ಪದ ಬೇಕಾದರೂ ಮೊದಲು ಬಿಡಿಸಬಹುದು.

ಸಾಮಾನ್ಯವಾಗಿ, ಜನ ಎಡದಿಂದ ಬಲಕ್ಕೆ ಕೊಟ್ಟಿರುವ ಒಂದೊಂದು ಪದಗಳ ಸೂಚನೆಯನ್ನು ಓದುತ್ತಾ ಹೊಗುತ್ತಾರೆ. ಯಾವುದಾದರು ಪದ ಹೊಳೆದರೆ, ಅದನ್ನು ಪದಬಂಧದ ಚೌಕಗಳಲ್ಲಿ ಬರೆಯುತ್ತಾರೆ. ಉತ್ತರ ಸಿಕ್ಕಿದ ಅಕ್ಕ ಪಕ್ಕ, ಮೇಲೆ ಕೆಳಗೆ ಬರುವ ಪದಗಳ ಸೂಚನೆಯನ್ನು ಓದಿ, ಆ ಪದ ಹೊಳೆಯುತ್ತದೆಯೇ ಪ್ರಯತ್ನಿಸುತ್ತಾರೆ. ಅದು ಹೊಳೆದರೆ, ಮತ್ತೆ ಅದರ ಅಕ್ಕ ಪಕ್ಕ , ಮೇಲೆ ಕೆಳಗೆ, ಹೀಗೆ ಸಮಸ್ಯೆ ಬಿಡಿಸುವ ಪ್ರಕ್ರಿಯೆ ಮುಂದುವರೆಯುತ್ತದೆ.

ಮೇಲ್ನೋಟಕ್ಕೆ ಇದು ನಮಗೆ ತಿಳಿದಿರುವ ಶಬ್ದ ಬಂಢಾರದ ಪರೀಕ್ಷೆಯೇನಿಸಿದರೂ, ಇದು ಸಮಸ್ಯೆ ಬಿಡಿಸುವ ಕೌಶಲ್ಯವನ್ನು ಪರೀಕ್ಷಿಸುತ್ತದೆ. ಜೀವನದಲ್ಲಿ ದಿನನಿತ್ಯ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಲೇ ಇರುತ್ತದೆ. ಹಾಗಾಗಿ ಪ್ರತಿಯೊಬ್ಬ ಮನುಷ್ಯನಿಗೆ ಸಮಸ್ಯೆ ಬಿಡಿಸುವ ಕೌಶಲ್ಯವಿದ್ದಾರೆ ಜೀವನ ಸರಾಗ. ಸಮಸ್ಯೆ ಒಂದು ರೀತಿ ಗಂಟುಗಳ ಹಾಕಿಕೊಂಡ ಸರವಿದ್ದ ಹಾಗೆ. ಎಲ್ಲೋ ಒಂದು ಕಡೆ ಸರದ ಒಂದು ಗಂಟನ್ನು ಮೊದಲು ಬಿಡಿಸಬೇಕು.ನಂತರ ಮತ್ತೊಂದು, ಇನ್ನೊಂದು. ಒಂದೊಂದಾಗಿ ಎಲ್ಲ ಗಂಟುಗಳನ್ನೂ  ಬಿಡಿಸಿದರೆ, ಸರದ ಸಮಸ್ಯೆ ಬಗೆ ಹರಿಯುತ್ತದೆ. ಹಾಗೆ ಈ ಪದಬಂಧ. ನಾನು ಮೂರನೇ ಪದ ಮೊದಲು ಬಿಡಿಸಿದರೆ, ನೀವು ಅದನ್ನು ಕೊನೆಗೆ ಬಿಡಿಸಬಹುದು. ಒಬ್ಬಬ್ಬರದ್ದು ಒಂದೊಂದು ಅನುಕ್ರಮವಿರಬಹುದು. ಗುರಿ ಮಾತ್ರ ಪೂರ್ತಿ ಪದಬಂಧ ಮಾಡುವುದು. ಒಟ್ಟು, ಪದಬಂಧ ಮಾಡುವುದರಿಂದ ನಾವು ಸಮಸ್ಯೆ ಬಿಡಿಸುವ ಕೌಶಲ್ಯವನ್ನು ಕಲಿಯುತ್ತೇವೆ. ಈ ಕೌಶಲ್ಯ ಪರೋಕ್ಷವಾಗಿ ನಮ್ಮ ಜೀವನದಲ್ಲಿ ದಿನ ನಿತ್ಯ ಸಹಾಯವಾಗುತ್ತದೆ.

ಎಲ್ಲ ಪದಗಳೂ ನನಗೊಬ್ಬಳಿಗೆ ಹೊಳೆಯುತ್ತದೆ ಎಂದು ಹೆಳಲಾಗದು. ನನಗೆ ಹೊಳೆಯದಿದ್ದಾಗ ನಾನು ನಮ್ಮ ಮನೆಯಲ್ಲಿ ಅಮ್ಮ ಅಪ್ಪನನ್ನೂ, ಅಣ್ಣನನ್ನೋ ಮತ್ಯಾರನ್ನೋ ಕೇಳುವೆ. ಅದರಿಂದ ನನ್ನ ಪದಬಂಧ ವೇಗವಾಗಿ ಸಾಗುತ್ತದೆ ಮತ್ತು ಸಂಪೂರ್ಣಗೊಳಿಸಲು ಸಹಾಯವಾಗುತ್ತದೆ. ಇದು ನಮಗೆ ಒಗ್ಗಟ್ಟಿನಲ್ಲಿ ಹೆಚ್ಚು ಬಲ ಎಂಬುದನ್ನು ಮನದಟ್ಟು ಮಾಡುತ್ತದೆ. ಸಮಸ್ಯೆಗಳು ಬಂದಾಗ ನಮಗೆ ಸಮಸ್ಯೆ ನಿವಾರಿಸಿಕೊಳ್ಳುವ ಬಲವಿರದಿದ್ದಾಗ ಮನೆಯವರ, ಸ್ನೇಹಿತರ ಸಹಾಯ ಕೇಳುವ ಮನೋಭಾವ, ಹಾಗೆ ಸಹಾಯ ಹಸ್ತ ನೀಡುವ ಮನೋಭಾವವನ್ನು ಹುಟ್ಟು ಹಾಕುತ್ತದೆ.

ನೀವು ಪದಬಂಧ ಮಾಡ್ತೀರಲ್ಲ ಇವತ್ತಿಂದ? ನಿಮ್ಮ ಮಕ್ಕಳಿಗೂ ಅಭ್ಯಾಸ ಕಲಿಸುತ್ತೀರಲ್ಲ?




Sunday, May 17, 2015

ನಿವೇದನೆ

ಸತ್ತವರೇ
ನೆಮ್ಮದಿ ನಿಶ್ಚಿಂತೆಗಳ
ಶಾಶ್ವತವಾಗಿ ಅಪ್ಪಿ
ಮರೆಯಾದವರೇ
ನಿಮಗರಿವಿದೆಯೇ?
ನಿಮ್ಮ ನೆನಪು
ಕಣಕಣವಾಗಿ
ಕೊಲ್ಲುವುದೆಮ್ಮ
ನಿಮ್ಮ ಅಗಲಿಕೆಯ
ಗಾಯ ಮಾಗದೆ
ಆಗಾಗ ಒಡೆದು
ಉರಿ ನೋವು
ನಿಮ್ಮೊಡನಾಟ
ಹಂಬಲಿಸಿದೆ ಮನ
ನಿಮ್ಮ ಸಾನಿಧ್ಯವ
ಬಯಸಿದೆ ಮನ
ನೀವೇನೋ
ಹೊರಟುಬಿಟ್ಟಿರಿ...
ಈ ಮಾಗದ ಗಾಯ
ಅಳಿಸಲಾಗದ ಛಾಯೆ
ನೀಗದ ನೋವು
ನಾವಿರುವವೆಗೆ..

Tuesday, April 7, 2015

ವಿಚಿತ್ರ ಸತ್ಯ

ಪರರ
ದೊಡ್ಡ ತಪ್ಪಗಳನ್ನು
ಮನ್ನಿಸಿ ಮರೆವ
ಮನಸು
ಅದೇಕೋ
ತನ್ನವರ ಸಣ್ಣ ತಪ್ಪುಗಳ
ಆಗಾಗ ಹಾಕುತ್ತಲೇ ಇರುತ್ತೆ
ಮೆಲಕು!

Thursday, April 2, 2015

The Change

It used to rain in rainy days
Sun was out radiating heat in summer
My bones used to ache to chilly winter
Those were the days of pain

She was present
He was there very next to me
They were all around me
Those were the days of sadness

There were people around
But I was alone
I was alone and
Loneliness used to kill me

I had a job for a living
My passions in the free time
I had everything on the earth to live
But Those were the days of no peace

It still rains in the rainy days
May be sun is hotter  in summer
My bones still ache during chilly winter
But I enjoy everyday and each of these things

She is present
May be someone else next to me now
They are still all around me
I am happy no matter who is there

There are people around
I enjoy little bit of their company
I get into my space of shell
To enjoy my solitude

I have the same job today
Passions still have kept their company
I have everything on this earth to live
I am living my life to the fullest

Yes, it the same seasons
They are pretty much the same people
My problems are almost the same
But I have changed!

Tuesday, March 24, 2015

ಸಂಬಂಧ

ನಲ್ಲಾ
ಹೌದಲ್ಲಾ
ಈ ನಡುವೆ
ನಿನ್ನ ಮೇಲೆ
ಕಡಿಮೆಯಾಗಿದೆ
ಎನ್ನ ಆಸಕ್ತಿ
ಹೆಚ್ಚಾಗಿದೆ
ವಿರಕ್ತಿ
ಆ ನಿನ್ನ ಸ್ಪರ್ಷದಿ
ಮೈಯಲಿ ಮುಳ್ಳು
ಚುಂಬನವೋ
ನಿನ್ನ ದೂಡಿ
ದೂರ ತಳ್ಳೋ ಬಯಕೆ
ಈ ಮನಕೆ
ನಿನ್ನ ಸಾನಿಧ್ಯವೇ
ಬೇಡದು
ನಿನ್ನ ನೆನಪೂ
ಕೂಡ ಕಾಡದು
ಇದೆಂತ ಬದಲಾವಣೆ ನಲ್ಲ
ಮೊನ್ನೆ ಮೊನ್ನೆಯವರೆಗೂ
ನಿನ್ನೆದೆಯಲಿ
ಮನ ಹುದಿಗೆ
ಅದೆಂತ ಸುಖ
ನಿನ್ನಪ್ಪಿಗೆ
ಅದೇನು ಹಿತ!
ಇದ್ದಕ್ಕಿದ್ದಂತೆ
ಇದೇನಾಯಿತು ನಲ್ಲ
ನನ್ನ ನಿನ್ನ ನಡುವೆ?
ಯಾರದಾರೂ ದೃಷ್ಟಿ
ತಾಕಿತೇ?
ಮಾಟ ಮಾಡಿಸಿದರೆ?
ಅದೆಂತು ಅಲ್ಲ
ಈ ಧಗ ಧಗ ಬೇಸಿಗೆ
ಬೇಡವಾಗಿದೆ
ನನ್ನ ಹೊದಿಕೆ!

Monday, February 2, 2015

ಯುಗಾದಿ ಹಾದಿ

ಹಳೆಯ ಯುಗವು ಕಳೆದು
ಹೊಸ ಯುಗದ ಬೆಳಕು ಹರಿದು
ಬರುವ ನಮ್ಮ ಯುಗಾದಿ
ಪ್ರತಿ ಚೈತ್ರದ ಪಾಡ್ಯದಿ

ಮನೆಮನೆಗಳಲಿ ತಳಿರು ತೋರಣ
ಅಡಿಗೆ ಮನೆಯಲಿ ಒಬ್ಬಟ್ಟ ಹೂರಣ
ಅಂಗಳದಿ ರಂಗೋಲಿ ಚಿತ್ತಾರ
ದೇವರಿಗೆ ಹೂ ದೀಪಗಳ ಅಲಂಕಾರ

ತಿನ್ನುವೆವು ಬೇವು ಬೆಲ್ಲದ ಮಿಶ್ರಣ
ಜೊತೆಗೆ ಪಂಚಾಂಗ ಶ್ರವಣ
ಬದುಕು ಕಷ್ಟ ಸುಖಗಳ ಸಂತೆ
ಈ ವರುಷ ಮಳೆ ಬೆಳೆ ಹೇಗಂತೆ?

ಹೊಸ ಬಟ್ಟೆ ಧರಿಸಿ
ನವ ಸಂವತ್ಸರ ಸ್ವಾಗತಿಸಿ
ಆರೋಗ್ಯ ಸಂತೃಪ್ತಿ ನೆಮ್ಮದಿಯ ಭರವಸೆಯಲಿ
ಹೊಸ ವರುಷದ ಸಂಭ್ರಮದಲಿ

ಆಚರಿಸುವ ಬನ್ನಿ ಯುಗಾದಿ
ತುಳಿಯುವ 'ಮನ್ಮಥ'ನ ಹಾದಿ!









ಒಂದು ಪ್ರೇಮ ಕವಿತೆ

ನಾ ನಿನ್ನ  ಅರಸದೆ, ಬಯಸದೆ  ನೀ ನನ್ನ  ಅರಸದೆ, ಬಯಸದೆ  ವಿಧಿಯು ನಮ್ಮ  ಕೂಡಿಸಿರೆ ನಮ್ಮೀ ನಿತ್ಯ ಮಿಲನ  ಸುದೀರ್ಘ ಪಯಣ   ಹಾಕಿದೆ ಬುನಾದಿ  ನನ್ನ ಬದುಕಿಗೆ  ನನ್ನ ಮನದಲಿ...